ಸುನಂದಾ ಪುಷ್ಕರ್​ ಪ್ರಕರಣ: ಶಶಿ ತರೂರ್​​ರನ್ನು ಆರೋಪ ಮುಕ್ತಗೊಳಿಸಿದ ದೆಹಲಿ ನ್ಯಾಯಾಲಯ

Aug 18, 2021

2014ರ ಜನವರಿಯಲ್ಲಿ ದೆಹಲಿಯ ಪಂಚತಾರಾ ಹೋಟೆಲ್​​ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಸುನಂದಾ ಪುಷ್ಕರ್ (Sunanda Pushkar )​​ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ಶಶಿ ತರೂರ್ (Shashi Tharoor)ಇದೀಗ ಆರೋಪ ಮುಕ್ತರಾಗಿದ್ದಾರೆ. ಅವರನ್ನು ಆರೋಪ ಮುಕ್ತಗೊಳಿಸಿ ದೆಹಲಿ ಕೋರ್ಟ್​ ತೀರ್ಪು ನೀಡಿದೆ. ಪತ್ನಿ ​​​ಸುನಂದಾ ಪುಷ್ಕರ್​ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್​ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ದೆಹಲಿ ಪೊಲೀಸರು ಅವರ ವಿರುದ್ಧ, ಸೆಕ್ಷನ್​ 498 ಎ (ಮಹಿಳೆಯು ತನ್ನ ಪತಿ ಅಥವಾ ಪತಿಯ ಸಂಬಂಧಿಗಳಿಂದ ಕ್ರೌರ್ಯಕ್ಕೆ ಒಳಗಾಗುವುದು), ಸೆಕ್ಷನ್​ 306 ( ಆತ್ಮಹತ್ಯೆಗೆ ಕುಮ್ಮಕ್ಕು) ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಮಾಜಿ ಕೇಂದ್ರ ಸಚಿವರೂ ಆಗಿರುವ ಶಶಿ ತರೂರ್​ ಜಾಮೀನು ಆಧಾರದ ಮೇಲೆ ಜೈಲಿನಿಂದ ಹೊರಗಿದ್ದರು. ಈ ಸಂಬಂಧ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ತರೂರ್​ ದೋಷಮುಕ್ತರೆಂದು ಕೋರ್ಟ್ ತೀರ್ಪು ನೀಡಿದೆ. ಬರೋಬ್ಬರಿ ಏಳೂವರೆ ವರ್ಷದ ಹಿಂಸೆ ಕೊನೆಗೊಂಡಿದೆ ಎಂದು ಹೇಳಿರುವ ಶಶಿ ತರೂರ್​, ಕೋರ್ಟ್​ಗೆ ಧನ್ಯವಾದ ಸಲ್ಲಿಸಿದ್ದಾರೆ.

Source: tv9 Kannada