ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

Mar 9, 2021

ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ‌ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ.

ಹಾಸನ: ಜಮೀನಿನ ದಾರಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ತಂದೆ, ತಾಯಿ ನಡುವೆ ಆಗಿರುವ ಜಗಳಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಗೆ ಭೇಟಿ ನೀಡಿದ ನಂತರ ಪ್ರತಿಕ್ರಿಯಿಸಿರುವ ನಟ ರಾಕಿಂಗ್​ ಸ್ಟಾರ್​ ಯಶ್​, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ. ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಎಲ್ಲಿಂದಲೋ‌ ಬಂದವರು ಅಂತಾರಂತೆ, ನಾನು ಇಲ್ಲೇ ಹುಟ್ಟಿ ಬೆಳೆದವನು ಸಾರ್, ನಾನು ಹಾಸನದಲ್ಲೂ ಮಾಡ್ತೀನಿ, ಬೆಳಗಾವಿಯಲ್ಲೂ ಮಾಡ್ತೀನಿ, ಮಂಗಳೂರಲ್ಲೂ ಮಾಡ್ತೀನಿ, ನಾವು ಸೆಲೆಬ್ರಿಟಿ ಆಗೋದೇ ತಪ್ಪು ಎನ್ನುವ ಹಾಗಾಗಿದೆ ಎಂದು ಗರಂ ಆಗಿದ್ದಾರೆ.

ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ‌ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ. ದುಡ್ದು ಮಾಡೋ ಹಾಗಿದ್ದರೆ ಬೆಂಗಳೂರಲ್ಲೇ ಮಾಡಬಹುದಿತ್ತು. ಅಲ್ಲಿ ಜಮೀನು ಮಾಡಿದ್ರೆ ಚೆನ್ನಾಗಿ ಹಣವೂ ಸಿಗ್ತಿತ್ತು. ನಾನು‌ ಹಾಸನದಲ್ಲಿ ಯಾಕೆ‌ ಜಮೀನು ಮಾಡಬೇಕು ಅರ್ಥ ಮಾಡ್ಕೊಳ್ಳಿ. ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕೆಂದು ಮಾಡಿದ್ದೇನೆ ಎಂದು ಹಾಸನ ಜಿಲ್ಲೆ ದುದ್ದಾ ಪೊಲೀಸ್ ಠಾಣೆ ಎದುರು ನಟ ಯಶ್ ಹೇಳಿದ್ದಾರೆ.

ನಾವೂ ಅಪ್ಪ ಅಮ್ಮನಿಗೆ ಹುಟ್ಟಿದ ಮಕ್ಕಳೇ. ತಂದೆ ತಾಯಿಗೆ ಮಾತನಾಡಿದರೂ ನಮ್ಮ ಇಮೇಜ್ ಎಂದು ಕೂರಲು ಆಗಲ್ಲ. ಎಲ್ಲರೂ ಮೀಡಿಯಾ ಇದೆ, ಮೀಡಿಯಾ ಇದೆ ಅಂತಾರೆ ಇರ್ಲಿ ಬಿಡ್ರೀ. ರಸ್ತೆ ವಿವಾದ ಒಂದೂವರೆ ವರ್ಷದ ಹಿಂದೆಯೇ ಮುಗಿದಿದೆ. ರಸ್ತೆ ವಿವಾದ ದೊಡ್ಡದಲ್ಲ. ಹೀಗೆಲ್ಲ ಬಣ್ಣ ಕಟ್ಟುತ್ತಾರೆ ನೀವು ನಂಬೋಕೆ ಹೋಗ್ಬೇಡಿ ಎಂದು ಕಿಡಿಕಾರಿದ್ದಾರೆ. ಈ ಘಟನೆ ಸಂಬಂಧ ಬೇಸರ ವ್ಯಕ್ತಪಡಿಸಿರುವ ರಾಕಿಗ್ ಸ್ಟಾರ್, ಸ್ಕೂಲ್‌ ಮಾಡ್ತಾರಾ ಯಾರಾದ್ರೂ ಅಥವಾ ಬಡವರಿಗೆ ಅನುಕೂಲ ಆಗುತ್ತಾ ಬೇಕಿದ್ರೆ ಕೇಳಲಿ ನಾವೇ ಹತ್ತು ಎಕರೆ ಜಮೀನು‌ ಕೊಡುತ್ತೇವೆ. ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ, ಅವರೂ ಮಾತನಾಡಿರಬಹುದು. ಆದರೆ, ತಂದೆ ತಾಯಿ ಜೊತೆ ಹಾಗೆ ಕೆಟ್ಟದಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ‌ಕೆಲ ಸ್ಥಳೀಯರ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.

Source: TV9Kannada