ಭಾರತದ ಸ್ಯಾಟ್‌ಲೈಟ್ ಮ್ಯಾನ್‌ ಉಡುಪಿ ರಾಮಚಂದ್ರ ರಾವ್‌ಗೆ ಗೂಗಲ್ ಡೂಡಲ್ ಗೌರವ

Mar 10, 2021

ದೆಹಲಿ(ಮಾ.10): ಭಾರತದ ಸ್ಯಾಟ್ಲೈಟ್ ಮ್ಯಾನ್ ಪ್ರೊಫೆಸರ್, ವಿಜ್ಞಾನಿ ಉಡುಪಿ ರಾಮಚಂದ್ರ ರಾವ್ ಅವರ ಜನ್ಮದಿನದಂದು ಗೂಗಲ್ ಡೂಡಲ್ ಮೂಲಕ ಗೌರವಿಸಿದೆ.

ಭಾರತದ ಸ್ಪೇಸ್ ವಿಜ್ಞಾನಿ ಮತ್ತು ಇಸ್ರೋ ಮುಖ್ಯಸ್ಥ 1975ರ ಭಾರತದ ಮೊದಲ ಸ್ಯಾಟ್ಲೈಟ್ ಆರ್ಯಭಟ ಲಾಂಚ್ನ ನೇತೃತ್ವ ವಹಿಸಿದ್ದರು.ಡೂಡಲ್ನಲ್ಲಿ ಪ್ರೊಫೆಸರ್ ರಾವ್ ಅವರ ಸ್ಕೆಚ್ ಇದ್ದು, ಬ್ಯಾಗ್ರೌಂಡ್ನಲ್ಲಿ ಭೂಮಿ ಮತ್ತು ನಕ್ಷತ್ರಗಳ ಚಿತ್ರವಿದೆ. ನಿಮ್ಮ ಅದ್ಭುತ ತಾಂತ್ರಿಕ ಪ್ರಗತಿಗಳು ಗ್ಯಾಲಕ್ಸಿ ಅನುಭವಿಸುತ್ತಲೇ ಇರುತ್ತದೆ ಎಂದು ಗೂಗಲ್ ತನ್ನ ಡಿಸ್ಕ್ರಿಪ್ಶನ್ನಲ್ಲಿ ಬರೆದಿದೆ.

ಕರ್ನಾಕದ ಪುಟ್ಟ ಹಳ್ಳಿಯಲ್ಲಿ 1932ರಲ್ಲಿ ಜನಿಸಿದ ರಾವ್ ಅವರು ಭಾರತದ ಸ್ಪೇಸ್ ಪ್ರೋಗ್ರಾಮ್‌ನ ಪಿತಾಮಹ ಎಂದು ಕರೆಯಲ್ಪಡುತ್ತಿದ್ದ ಡಾ.ವಿಕ್ರಮ್ ಸಾರಾ ಬಾಯ್ ಅವರ ಕೈಕೆಳಗೆ ಕಾಸ್ಮಿಕ್-ರೇ ಭೌತಶಾಸ್ತ್ರಜ್ಞನನಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಡಾಕ್ಟರೇಟ್ ಮುಗಿಸಿದ ನಂತರ ಅಮೆರಿಕದಲ್ಲಿ ಪ್ರೊಫೆಸರ್ ಆಗಿ ದುಡಿದು ನಾಸಾ ಬಾಹ್ಯಾಕಾಶ ಶೋಧಕಗಳಲ್ಲಿ ಪ್ರಯೋಗಗಳನ್ನುಮಾಡಿದರು ಎಂದು ಗೂಗಲ್ ವಿವರಿಸಿದೆ.

1966ರಲ್ಲಿ ಭಾರತಕ್ಕೆ ಮರಳಿದ ರಾವ್ ಅವರು 1972 ರಲ್ಲಿ ತನ್ನ ದೇಶದ ಉಪಗ್ರಹ ಕಾರ್ಯಕ್ರಮವನ್ನು ಮುನ್ನಡೆಸುವ ಮೊದಲು ಬಾಹ್ಯಾಕಾಶ ವಿಜ್ಞಾನಕ್ಕಾಗಿ ಭಾರತದ ಪ್ರಮುಖ ಸಂಸ್ಥೆಯಾದ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಉನ್ನತ-ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

1984 ರಿಂದ 1994 ರವರೆಗೆ, ಪ್ರೊ. ರಾವ್ ಅವರು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ತಮ್ಮ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುಂದುವರೆಸಿದರು.

ರಾವ್ 2013 ರಲ್ಲಿ ಸ್ಯಾಟಲೈಟ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಅದೇ ವರ್ಷ ಪಿಎಸ್‌ಎಲ್‌ವಿ ಭಾರತದ ಮೊದಲ ಅಂತರಗ್ರಹ ಮಿಷನ್ “ಮಂಗಳಯಾನ್” ಅನ್ನು ಪ್ರಾರಂಭಿಸಿತು-ಇದು ಇಂದು ಮಂಗಳವನ್ನು ಪರಿಭ್ರಮಿಸುತ್ತದೆ. 2017 ರಲ್ಲಿ ಪ್ರೊ.ರಾವ್ ನಿಧನರಾದರು

Source: Suvarna News