ಮೈಸೂರಿನಲ್ಲಿ ಜನವರಿಯಿಂದ ಜುಲೈವರೆಗೆ ನಡೆದ ಒಟ್ಟು 63 ಅಪರಾಧ ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಭೇದಿಸಿದ್ದಾರೆ.

ಮೈಸೂರು: ನಗರದಲ್ಲಿ ಜನವರಿಯಿಂದ ಜುಲೈವರೆಗೆ ನಡೆದ ಒಟ್ಟು 63 ಅಪರಾಧ ಪ್ರಕರಣಗಳನ್ನು ಜಿಲ್ಲಾ ಪೊಲೀಸರು (Police) ಭೇದಿಸಿದ್ದಾರೆ. ಲಾಭಕ್ಕಾಗಿ ಒಂದು ಕೊಲೆ, ಎರಡು ದರೋಡೆ ಪ್ರಕರಣ, ನಾಲ್ಕು ಸುಲಿಗೆ, ಎರಡು ಸರಗಳ್ಳತನ, 38 ಕಳ್ಳತನ ಪ್ರಕಣಗಳು, 15 ವಾಹನ ಕಳ್ಳತನ ಮತ್ತು ಒಂದು ವಂಚನೆ ಪ್ರಕರಣ ನಡೆದಿದೆ. ಒಟ್ಟು 63 ಪ್ರಕರಣಗಳು ಪತ್ತೆಯಾಗಿದ್ದು 1,34,66,697 ರೂ. ಮೌಲ್ಯದ ಸ್ವತ್ತುಗಳು ವಶಕ್ಕೆ ಪಡೆಯಲಾಗಿದೆ.

ಚಿನ್ನ ಮತ್ತು ಬೆಳ್ಳಿ 1 ಕೆ.ಜಿ 770 ಗ್ರಾಂ, ನಗದು12,62,147ರೂ. 36,23,000 ಮೌಲ್ಯದ 22 ವಾಹನಗಳು, 80,800 ರೂ. ಮೌಲ್ಯದ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ 1 ಲಕ್ಷ ಮೌಲ್ಯದ ದೇವರ ವಿಗ್ರಹಗಳು, 25 ಲಕ್ಷ ಮೌಲ್ಯದ ವಿವಿಧ ಕಂಪನಿಯ ಒಟ್ಟು 192 ಮೊಬೈಲ್‌ಗಳು ಪತ್ತೆಯಾಗಿವೆ. ಅಲ್ಲದೇ 7 ಹಸು, 13 ಕುರಿಗಳು, 43 ಪಾರಿವಾಳಗಳನ್ನು ಮಾಲಿಕರಿಗೆ ಹಿಂದಿರುಗಿಸಲಾಗಿದೆ ಎಂದು ಎಸ್ ಪಿ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.

ಮೈಸೂರು: ಚಲಿಸುತ್ತಿದ್ದ ಟೆಂಪೋ ಚಕ್ರದಡಿ ಸಿಲುಕಿ ಬಾಲಕ ಮೃತಪಟ್ಟಿರುವ ಘಟನೆ ನಗರದ ಅಭಿಷೇಕ್ ವೃತ್ತದಲ್ಲಿ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ ಬಾಲಾಜಿ (10) ಮೃತ ದುರ್ದೈವಿ. ಮತ್ತೊಬ್ಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಬಾಲಕರು ಸೈಕಲ್​ನಲ್ಲಿ ಮನೆಗೆ ತೆರಳುತ್ತಿದ್ದರು. ವೇಗವಾಗಿ ತೆರಳುತ್ತಿದ್ದ ಹಿನ್ನೆಲೆ ಸೈಕಲ್​ ನಿಂಯಂತ್ರಣ ತಪ್ಪುದೆ.

ಇದರಿಂದ ಚಲಿಸುತ್ತಿದ್ದ ಟೆಂಪೋದ ಹಿಂದಿನ ಚಕ್ರಕ್ಕೆ ಸಿಲುಕಿ ಬಾಲಕ ಮೃತನಾಗಿದ್ದಾನೆ. ಮೈಸೂರಿನ ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕ ಮೂಲತಃ ಯಳಂದೂರಿನ ರಾಮಣ್ಣ ಎಂಬುವರ ಪುತ್ರನಾಗಿದ್ದಾನೆ

Source: TV9 KANNADA