ಮೈಸೂರಿನಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ಕಿಡಿಗೇಡಿಗಳು; ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Apr 20, 2021

ಟ್ಯಾಂಕ್ ಪರಿಶೀಲನೆ ವೇಳೆ ಕ್ರಿಮಿನಾಶಕ ಬೆರೆಸಿದ್ದು ಬೆಳಕಿಗೆ ಬಂದಿದ್ದು, ಬಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯದ 40 ಅಡಿ ಎತ್ತರ ಟ್ಯಾಂಕ್​ಗೆ ಯಾರೋ ಕ್ರಿಮಿನಾಶಕ ಹಾಕಿದ್ದಾರೆ. ನಲ್ಲಿಯ ನೀರಿನಲ್ಲಿ ಘಾಟಿನ ವಾಸನೆ ಕಂಡು ತಕ್ಷಣ ಗ್ರಾಮಸ್ಥರು ಎಚ್ಚರಿಸಿಕೊಂಡಿದ್ದಾರೆ.

ಮೈಸೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ಸಂದಿಗ್ಧ ಕಾಲದಲ್ಲಿ ಎಷ್ಟು ಜವಾಬ್ದಾರಿಯಾಗಿ ಇದ್ದರೂ ಸಾಲೋದಿಲ್ಲ. ಸರ್ಕಾರ, ಸಲಹಾ ತಜ್ಞ ಸಮಿತಿ ಕೊರೊನಾ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಲಾಕ್​ಡೌನ್​ ಎದುರಾದರೆ ಕೆಲವೆಡೆ ಕುಡಿಯುವ ನೀರಿಗೂ ದೊಡ್ಡ ಸಮಸ್ಯೆಯಾಗುತ್ತದೆ. ಈ ನಡುವೆ ಮೈಸೂರಿನಲ್ಲಿ ಕುರಹಟ್ಟಿಯಲ್ಲಿ ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ್ದಾರೆ. ಕಿಡಿಗೇಡಿಗಳು ಕುಡಿಯುವ ನೀರಿಗೆ ಕ್ರಿಮಿನಾಶಕ ಬೆರೆಸಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಕುರಹಟ್ಟಿ ಸಂಭವಿಸಿದೆ. ಕುರಹಟ್ಟಿಯ 40 ಅಡಿ ಎತ್ತರದ ಟ್ಯಾಂಕ್​ಗೆ ಕಿಡಿಗೇಡಿಗಳು ಕ್ರಿಮಿನಾಶಕವನ್ನು ಹಾಕಿದ್ದಾರೆ.

ಟ್ಯಾಂಕ್ ಪರಿಶೀಲನೆ ವೇಳೆ ಕ್ರಿಮಿನಾಶಕ ಬೆರೆಸಿದ್ದು ಬೆಳಕಿಗೆ ಬಂದಿದ್ದು, ಬಾರಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. 50 ಸಾವಿರ ಲೀಟರ್ ಸಾಮರ್ಥ್ಯದ 40 ಅಡಿ ಎತ್ತರ ಟ್ಯಾಂಕ್​ಗೆ ಯಾರೋ ಕ್ರಿಮಿನಾಶಕ ಹಾಕಿದ್ದಾರೆ. ನಲ್ಲಿಯ ನೀರಿನಲ್ಲಿ ಘಾಟಿನ ವಾಸನೆ ಕಂಡು ತಕ್ಷಣ ಗ್ರಾಮಸ್ಥರು ಎಚ್ಚರಿಸಿಕೊಂಡಿದ್ದಾರೆ. ನಂತರ ನೀರಿನ ಟ್ಯಾಂಕರ್​ನ ಪರಿಶೀಲನೆ ಮಾಡಿದಾಗ ನೀರಿನಲ್ಲಿ ಕ್ರಿಮಿನಾಶಕ ಬೆರೆಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

source:TV9Kannada